ಮುಖಾಮುಖಿ

ಮನಸಿನಾಳದಿಂದ
ಎದ್ದ ಬುದ್ಧ ಈಗ
ಮತ್ತೆ ಬಂದಿದ್ದಾನೆ.

ಮೊದಲಿನಂತೆಯೇ
ರಾತ್ರಿಯಿಡೀ ದಿಟ್ಟಿಸಿನೋಡುತ್ತಾ
ನೂರು ಗೊಂದಲಗಳ
ಮೂಡಿಸಿ ಕಾಡುತ್ತಾನೆ.

ಕೇಳುತ್ತಾನೆ ಒಂದೇ ಪ್ರಶ್ನೆ
“ಈಗ… ಈಗ ಬರುವೆಯಾ ನನ್ನೊಡನೆ?”

ನನ್ನದು ಮತ್ತದೇ
ಹಳಸಲು ಕಾರಣಗಳು
ಅವನಿಂದ ತಪ್ಪಿಸಿಕೊಳ್ಳಲು
ಬದುಕಿನಾಮಿಷದ ನೆವಗಳು!
ನಗುತ್ತಾ ಒಳಹೋಗಿ ಬಿಡುತ್ತಾನೆ
ಆ ನಗೆಗೆಷ್ಟು ಅರ್ಥಗಳು!

ನಿತ್ಯವೂ ಕಾದೆಣ್ಣೆಯಲಿ
ಸಿಡಿದು ಸತ್ತರೂ
ಸಾವಿರ ಸಾಸಿವೆಗಳು
ವೈರಾಗ್ಯೋದಯವಾಗುವುದಿಲ್ಲ

ಹೊತ್ತಿಗೆಯ ಕೊನೆಯ
ಪುಟದವರೆಗೂ ತಿರುವದೇ
ಕೊಡ ತುಂಬಬೇಕಲ್ಲಾ!

ಆದರೂ ಅಂದಿನಂತೆಯೇ
ಮತ್ತೆ ಮತ್ತೆ
ಮನಸಿನಾಳದಿಂದೆದ್ದು
ಬುದ್ಧ ಬರುತ್ತಾನೆ
‘ಈಗ… ಬರುವೆಯಾ?’ ಕೇಳುತ್ತಾನೆ.

ನಾನೀಗ ಅನುಮಾನಿಸುತ್ತಾ
ಮತ್ತದೇ ಸತ್ತ ಉತ್ತರ
ಗಳಹುತ್ತೇನೆ
ಆದರೆ ಏಕೋ
ಇತ್ತೀಚೆಗವನು ನಗುವುದಿಲ್ಲ!
ಮಹಾಮೌನಿಯಾಗಿದ್ದಾನೆ
ನಾನು ಹೆದರುತ್ತೇನೆ
ಬಹುಶಃ ಅವನು ಬೆಳೆದಿದ್ದಾನೆಂದು
ಅವನೊಂದಿಗೆ
ಆಳಕ್ಕಿಯುವುದು ಸುಲಭದ ಮಾತೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಮಾನ
Next post ಅಯ್ಯಪ್ಪ ಸಾಮಿ ಕಾಲ ಟಚ್ ಮಾಡಿದ್ಳಂತಲ್ಲಪ್ಪೋ ಜಯ್ಮಾಲ!

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys